ಸಾವಿರ ಬಗೆಯಲಿ ಸಾಗುತಿದೆ

ಸಾವಿರ ಬಗಯಲಿ ಸಾಗುತಿದೆ
ಸ್ವಾತಂತ್ರ್ಯದ ಲಾಸ್ಯ,
ಬಾನು ಬುವಿಯೂ ಬರೆಯುತಿವೆ
ಸಿರಿಬೆಳಕಿನ ಭಾಷ್ಯ.

ಒಣಗಿದ ಮರದಲಿ ಸಾಗುವ ಚೈತ್ರನ
ಚಿಗುರಿನ ದಾಳಿಯಲಿ,
ಮುಗಿಲ ಬಾಗಿಲ ಸರಿಸಿ ಸುರಿಯುವಾ
ನಿರ್ಮಲ ಧಾರೆಯಲಿ,
ಕಾಷ್ಠದ ಸೆರೆಯಲ್ಲಿ
ಕುದಿಯುತ ಮರೆಯಲ್ಲಿ
ಭಗ್ಗನೆ ಬಂಧನ ಭೇದಿಸುವಾ
ಕೆರಳಿದ ಜ್ವಾಲೆಯಲಿ.

ಬೆಳಗು ಬಾನಿನಲಿ ಹೊನ್ನಿನ ಬಿಂಬ
ಹಚ್ಚಿದೆ ಸಿರಿಹಣತೆ,
ಹಕ್ಕಿದನಿಗಳೀ ದಿಕ್ಕಿನ ತುಂಬ
ದನಿಯೊಡದಿದೆ ಕವಿತೆ,
ಅರಳಿದ ಸುಮಸರಣಿ
ಪರಿಮಳದಾ ಭರಣಿ
ವಾಯುಮಂಡಲವ ಘಮಘಮಿಸಿ
ಕೆಂಪಾಗಿದೆ ಧರಣಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಗಬೇಕೆ ಸುಬ್ಬಣ್ಣ
Next post ಚಂಡ ಶಾಸನ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys